ಗಜೇಂದ್ರಗಡ ತಾಲೂಕಿನ ರಾಜೂರ ಗ್ರಾಮದಲ್ಲಿ ದಿನಾಂಕ 7/7/2025 ರಂದು ರಾಜೂರ ಗ್ರಾಮದ ಕೊಡಗಾನೂರ ರಸ್ತೆಯ ಹೊರವಲಯದ ಸೂಗುರೇಶ ಹಾದಿಮನಿ ಇವರ ಜಮೀನುನಲ್ಲಿ ಸಂಜೆ ವೇಳೆ ಯುವ ಪ್ರೇಮಿಗಳು ವಿಷ ಸೇವೆನೇ ಮಾಡಿದ್ದಾರೆ,ನಂತರ ರಾಜೂರ ಗ್ರಾಮದ ವ್ಯಕ್ತಿಯೋರ್ವ ನೋಡಿ ಸ್ಥಳೀಯ ಗಜೇಂದ್ರಗಡದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ದಿನಾಂಕ 8/7/2025 ರಂದು ಅಪ್ರಾಪ್ತಿ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾಳೆ, ಈ ಯುವತಿ ಬಸವಣ್ಣೆವ್ವ ತಂದೆ ಶರಣಪ್ಪ ಗೂಳಿ ವಯಾ 16ವರ್ಷ 10 ತಿಂಗಳು. ಪ್ರಸ್ತುತ ಈ ವಿದ್ಯಾರ್ಥಿನಿ ಗಜೇಂದ್ರಗಡದ ಶ್ರೀ ಅನ್ನದಾನೇಶ್ವರ ಪಿ, ಯು, ಕಾಲೇಜು ನಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದಳು, ಅದೇ ಗ್ರಾಮದ ದೇವಪ್ಪ ತಂದೆ ಹಣಮಪ್ಪ, ಹಾದಿಮನಿ ವಯಾ -27 ಆಟೋ ಚಾಲಕನಾಗಿದ್ದು, ಸುಮಾರು ವರ್ಷಗಳಿಂದ (3-4) ಪ್ರೀತಿ ಬಲೆಯಲ್ಲಿ ಬಿದ್ದಿದ್ದರು. ಸದ್ಯ ಯುವಕನ ಸ್ಥಿತಿ ಗಂಭೀರವಾಗಿದ್ದು, ಗಜೇಂದ್ರಗಡದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೃತ ವಿದ್ಯಾರ್ಥಿನಿಯ ತಾಯಿ ರೇಣುಕಾ ಶರಣಪ್ಪ ಗೂಳಿ ಪ್ರಕರಣ ದಾಖಲು ಮಾಡಿದ್ದಾರೆ. ವರದಿ -ಶ್ರೀಕಾಂತ ಅಂಗಡಿ ಕನ್ನಡ ಜನಶ್ರೀ ದಿನ ಪತ್ರಿಕೆ ಗಜೇಂದ್ರಗಡ.


