ನರೇಗಲ್ಲ: ದೈಹಿಕ ಸಮತೋಲನೆಗಾಗಿ ಯೋಗ ಮತ್ತು ಯೋಗಾಸನ ಪ್ರತಿಯೊಬ್ಬ ಮನುಷ್ಯನ ನೆಮ್ಮದಿಗೆ ಪೂರಕವಾಗಿದ್ದು, ಮನೋವಿಕಾಸಕ್ಕೆ ಮುನ್ನುಡಿಯಾಗಿದೆ. ಇಡೀ ವಿಶ್ವಕ್ಕೆ ಯೋಗ ಮತ್ತು ಆಧ್ಯಾತ್ಮವನ್ನು ಪ್ರಸ್ತುತ ಪಡಿಸಿದ ಭಾರತ ನಿತ್ಯ ಪ್ರಕಾಶಿಸುವ ರಾಷ್ಟೃವಾಗಿದೆ ಎಂದು ಡಾ. ಆರ್.ಕೆ. ಗಚ್ಚಿನಮಠ ಹೇಳಿದರು.

ಪಟ್ಟಣದ ಶ್ರೀ ಜಗದ್ಗುರು ಪಂಚಾಚಾರ್ಯ ಗ್ರಾಮೀಣಾಭಿವೃದ್ದಿ ಶಿಕ್ಷಣ ಸಂಸ್ಥೆಯ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ ಮಾತನಾಡಿದರು. ದೈಹಿಕ ಶಿಕ್ಷಕಿ ವಿ.ಬಿ. ಬಿಂಗಿ ಮಕ್ಕಳಿಗೆ ಯೋಗಾಸನ ತಿಳಿಸಿಕೊಟ್ಟರು ಈ ಸಂದರ್ಭದಲ್ಲಿ ಸಂಸ್ಥೆ ಕಾರ್ಯದರ್ಶಿ ಈಶ್ವರ ಬೆಟಗೇರಿ, ಸಿಬ್ಬಂದಿಯವರಿದ್ದರು.

